ಬೆಳಗಿನ ಮಂಜಿನ ಹನಿಗಳು
ಕೆರೆಯ ನೀರಿನ ಮೇಲೆ ನಲಿಯುತ್ತಿದ್ದವು.
ಆ ನೀರಿನ ಆಳದಲ್ಲಿ,
ಮಣ್ಣಿನ ಮಡಿಲಿನಲ್ಲಿ
ಒಂದು ಪುಟ್ಟ ಕನಸು ಮಲಗಿತ್ತು.
ಕೆರೆಯ ನೀರಿನ ಮೇಲೆ ನಲಿಯುತ್ತಿದ್ದವು.
ಆ ನೀರಿನ ಆಳದಲ್ಲಿ,
ಮಣ್ಣಿನ ಮಡಿಲಿನಲ್ಲಿ
ಒಂದು ಪುಟ್ಟ ಕನಸು ಮಲಗಿತ್ತು.
ದಿನಗಳು ಕಳೆಯುತ್ತಾ ಹೋದವು,
ಮಳೆ ಸುರಿಯಿತು,
ಗಾಳಿ ಬೀಸಿತು,
ಆದರೂ ಆ ಕನಸು
ತನ್ನ ದಾರಿಯನ್ನು ಮರೆಯಲಿಲ್ಲ.
ಒಂದು ಪ್ರಭಾತದಲ್ಲಿ,
ಸೂರ್ಯನ ಮೊದಲ ಕಿರಣ
ಕೆರೆಗೆ ತಾಗಿದಾಗ,
ಆ ಕನಸು ನಿಧಾನವಾಗಿ
ನೀರಿನ ಮೇಲಕ್ಕೆ ಎದ್ದಿತು.
ಸೂರ್ಯನ ಮೊದಲ ಕಿರಣ
ಕೆರೆಗೆ ತಾಗಿದಾಗ,
ಆ ಕನಸು ನಿಧಾನವಾಗಿ
ನೀರಿನ ಮೇಲಕ್ಕೆ ಎದ್ದಿತು.
ಅದು ಕಮಲವಾಗಿತ್ತು.
ಮಣ್ಣಿನಲ್ಲಿ ಹುಟ್ಟಿದರೂ
ಮಣ್ಣಿನ ಕಲೆ ತಾಗದಂತೆ,
ನೀರಿನಲ್ಲಿ ಬೆಳೆದರೂ
ನೀರಿನ ಭಾರ ಹೊತ್ತಿರದಂತೆ,
ಅದು ತನ್ನ ದಳಗಳನ್ನು
ನಗುವಿನಂತೆ ಅರಳಿಸಿತು.
ಮಣ್ಣಿನ ಕಲೆ ತಾಗದಂತೆ,
ನೀರಿನಲ್ಲಿ ಬೆಳೆದರೂ
ನೀರಿನ ಭಾರ ಹೊತ್ತಿರದಂತೆ,
ಅದು ತನ್ನ ದಳಗಳನ್ನು
ನಗುವಿನಂತೆ ಅರಳಿಸಿತು.
ಕೆರೆಗೆ ಬಂದ ಹಕ್ಕಿಗಳು
ಅದನ್ನು ನೋಡಿ ಹಾಡಿದವು,
ಜೇನುಹುಳುಗಳು
ಅದರ ಸುವಾಸನೆಯಲ್ಲಿ ಮಿಂದೇಳಿದವು.
ಕಮಲವು ಮೌನವಾಗಿ ಹೇಳಿತು -
"ಜೀವನದ ದಾರಿ ಎಷ್ಟೇ ಕಠಿಣವಾಗಿರಲಿ,
ಮಣ್ಣಿನ ನಡುವೆ ಬೆಳೆದರೂ
ಸೌಂದರ್ಯವನ್ನು ಕಳೆದುಕೊಳ್ಳಬೇಡ.
ಕತ್ತಲಿನ ಆಳದಿಂದಲೂ
ಬೆಳಕಿನತ್ತ ಸಾಗಲು ಕಲಿತುಕೋ."
ಸಂಜೆಯ ಸೂರ್ಯ ಅಸ್ತಮಿಸಿದಾಗ,
ಕಮಲ ತನ್ನ ದಳಗಳನ್ನು ಮುಚ್ಚಿತು.
ಆದರೆ ಅದರ ಕಥೆ
ಕಮಲ ತನ್ನ ದಳಗಳನ್ನು ಮುಚ್ಚಿತು.
ಆದರೆ ಅದರ ಕಥೆ
ಕೆರೆಗೆ ಮಾತ್ರ ಸೀಮಿತವಾಗಲಿಲ್ಲ;
ಪ್ರತಿ ಮನಸ್ಸಿನಲ್ಲೂ
ಭರವಸೆಯ ಹೂವಾಗಿ ಅರಳಿತು.
ಪ್ರತಿ ಮನಸ್ಸಿನಲ್ಲೂ
ಭರವಸೆಯ ಹೂವಾಗಿ ಅರಳಿತು.
ಇಂತಿ,
ಲೇಖಕಿ ಸಹನೆ.